ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಅವರು ಭಾರತೀಯ ಲೋಕೋಪಕಾರಿ, ಶಿಕ್ಷಣ ತಜ್ಞ ಮತ್ತು ಶಾಸಕರಾಗಿದ್ದರು. ಅವರು ೧೯೫೫ ರಿಂದ ೧೯೬೮ ರವರೆಗೆ ಧರ್ಮಸ್ಥಳ ಮಂಜುನಾಥ ದೇವಸ್ಥಾನದ ಅನುವಂಶಿಕ ಆಡಳಿತಗಾರರಾಗಿ (ಧರ್ಮಾಧಿಕಾರಿ) ಹೆಸರುವಾಸಿಯಾಗಿದ್ದಾರೆ. == ಆರಂಭಿಕ ಜೀವನ == ಇವರು "ಪೆರ್ಗಡೆ" ಎಂಬ ಕುಟುಂಬದಲ್ಲಿ ಜನಿಸಿದರು. ಪೆರ್ಗಡೆಯವರು ಧರ್ಮಸ್ಥಳದ ದೇವಾಲಯದ ಪಟ್ಟಣದಲ್ಲಿ ಸಾಮಂತರಾಗಿದ್ದರು. ರತ್ನವರ್ಮ ಅವರುತಮ್ಮ ಆರಂಭಿಕ ಶಿಕ್ಷಣವನ್ನು ಮಂಗಳೂರಿನಲ್ಲಿ ಮುಗಿಸಿದರು . ಅವರು ಮೂಡಬಿದ್ರಿಯ ಶ್ರೀಮಂತ ಜಮೀನ್ದಾರ ಸಂಕಪ್ಪ ಶೆಟ್ಟಿಯವರ ಮಗಳು ರತ್ನಮ್ಮ ಹೆಗ್ಗಡೆಯವರನ್ನು ವಿವಾಹವಾದರು. ಈ ದಂಪತಿಗೆ ಐದು ಮಕ್ಕಳು, ನಾಲ್ಕು ಗಂಡು ಮಕ್ಕಳು (ವೀರೇಂದ್ರ, ಸುರೇಂದ್ರ, ಹರ್ಷೇಂದ್ರ, ರಾಜೇಂದ್ರ) ಮತ್ತು ಒಬ್ಬ ಮಗಳು (ಪದ್ಮಲತಾ) . == ವೃತ್ತಿ == ೧೯೫೫ ರಲ್ಲಿ ಅವರ ಚಿಕ್ಕಪ್ಪ ಮಂಜಯ್ಯ ಹೆಗ್ಗಡೆಯವರು ನಿಧನರಾದ ನಂತರ ರತ್ನವರ್ಮ ಹೆಗ್ಗಡೆಯವರು ಧರ್ಮಾಧಿಕಾರಿ ಹುದ್ದೆಗೆ ಬಂದರು. ಅವರು ಧರ್ಮಸ್ಥಳ ಗ್ರಾಮವನ್ನು ಆಧುನಿಕ ಪಟ್ಟಣವಾಗಿ ಪರಿವರ್ತಿಸಿ, ಭೂಮಿ ಮತ್ತು ಕಟ್ಟಡಗಳನ್ನು ಅಭಿವೃದ್ಧಿಪಡಿಸಿದರು. ಅವರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಶಿಕ್ಷಣ ಟ್ರಸ್ಟ್ ಅನ್ನು ಸ್ಥಾಪಿಸಿದರು ಮತ್ತು ೧೯೫೭ ರಿಂದ ೧೯೬೨ ರವರೆಗೆ ಕರ್ನಾಟಕ ವಿಧಾನಸಭೆಯಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿದರು. ಹೆಗ್ಗಡೆಯವರು ವೇಣೂರು, ಕಾರ್ಕಳ ಮತ್ತು ಶ್ರವಣಬೆಳಗೊಳದಲ್ಲಿರುವಂತೆ ಬಾಹುಬಲಿಯ ಪ್ರತಿಮೆಯನ್ನು ಸ್ಥಾಪಿಸುವ ಯೋಜನೆಯನ್ನು ಪ್ರಾರಂಭಿಸಿದರು . ೧೯೬೮ ರಲ್ಲಿ ಅವರ ಅಕಾಲಿಕ ಮರಣದ ನಂತರ ಅವರ ಮಗ ವೀರೇಂದ್ರ ಹೆಗ್ಗಡೆ ಅವರು ಯೋಜನೆಯನ್ನು ವಹಿಸಿಕೊಂಡರು ಮತ್ತು ಬಾಹುಬಲಿ ಪ್ರತಿಮೆ ಯೋಜನೆಯನ್ನು ಪೂರ್ಣಗೊಳಿಸಿದರು. == ಪರಂಪರೆ == ರತ್ನವರ್ಮ ಹೆಗ್ಗಡೆ ಎಂಬ ತುಳು ನಾಟಕ ಪ್ರಶಸ್ತಿ ಇದೆ. ತುಳು ಭಾಷೆಯ ಮಾಸಪತ್ರಿಕೆಯಾದ ತುಳುಕೂಟ ಪ್ರಾಯೋಜಿಸುವ ನಾಟಕ-ಬರಹ ಸ್ಪರ್ಧೆಯಲ್ಲಿ ಪ್ರತಿ ವರ್ಷ ಈ ಬಹುಮಾನವನ್ನು ನೀಡಲಾಗುತ್ತದೆ. ಭಾರತದ ಉಜಿರೆಯಲ್ಲಿರುವ ಒಂದು ಕ್ರೀಡಾಂಗಣಕ್ಕೆ ಅವರ ಹೆಸರನ್ನು ಇಡಲಾಗಿದೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಧರ್ಮಸ್ಥಳದ ಹಿಂದಿನ ಹೆಗ್ಗಡೆ